2018/2019 ನೇ ಇಸವಿ ಕೊಡಗು ಜಿಲ್ಲೆಯು ಪ್ರಾಕೃತಿಕ ವಿಕೋಪಕ್ಕೆ ತುತ್ತಾದಾಗ ಜನರಂತೆ ಹಲವಾರು ಜಾನುವಾರುಗಳು ನೆಲೆ ಕಳೆದುಕೊಂಡವು. ಈ ಜಾನುವಾರುಗಳು ತಮ್ಮ ಜೀವನಕ್ಕಾಗಿ ಕೊಡಗಿನ ನಗರಗಳನ್ನು ಆರಿಸಿಕೊಂಡು ಬೀದಿ ಬದಿಯಲ್ಲಿ ಕಸಕಡ್ಡಿಗಳನ್ನು ತಿಂದು ನೀರು ಕರುಗಳಿಗೆ ಜನ್ಮ ನೀಡಿ ಬದುಕಲು ಆರಂಭಿಸಿದವು. ಇವುಗಳಲ್ಲಿ ರಾತ್ರೋರಾತ್ರಿ ಕೆಲವು ಗೋವುಗಳು ಕಟುಕರ ಪಾಲಾದವು. ಕೊಡಗು ಜಿಲ್ಲೆಯಲ್ಲಿ ಗೋಶಾಲೆಯು ಇಲ್ಲದಿರುವುದನ್ನು ಮನಗಂಡು ಹೀಗೆ ಆದರೆ ಮುಂದಕ್ಕೆ ಮಲೆನಾಡು ತಳಿ ಹಾಗೂ ಗೋವುಗಳ ಸಂತತಿಯು ನಶಿಸುತ್ತದೆ ಎಂಬ ಅಭಿಪ್ರಾಯದಿಂದ ಕೊಡಗು ಜಿಲ್ಲೆಯಲ್ಲಿ ಎಲ್ಲೂ ಗೋ ಶಾಲೆಯ ಇಲ್ಲದಿರುವುದರಿಂದ ವಿಶ್ವಕರ್ಮ ಸಮುದಾಯ ಜಾಗ್ರತಾ ಸೇವಾ ಟ್ರಸ್ಟ್ (R) (SUKSJS Trust) (R) ಶ್ರೀ ಕೃಷ್ಣ ಗೋಶಾಲೆಯನ್ನು ಭಾಗಮಂಡಲದ ಚೆಟ್ಟಿಮಾನಿ ಎಂಬಲ್ಲಿ ಪ್ರಾರಂಭಿಸಲಾಯಿತು.
Copyright 2022 Designed By KEONICS-ISEARCH