ರಾಯಮ್ಮ ಗೋಶಾಲೆಯು ಬೀರೂರಿನಿಂದ ಸುಮಾರು 12.ಕಿ.ಮೀ ದೂರದ ಲಿಂಗದಹಳ್ಳಿ- ಬೀರೂರು ರಸ್ತೆ, ಆಲದಹಳ್ಳಿ ವೃತ್ತ, ಬೀರೂರು ಹೋಬಳಿ, ಇಲ್ಲಿ ತೆರೆಯಲಾಗಿದೆ. ಈ ಗೋಶಾಲೆಯನ್ನು ಶ್ರೀಯುತ ತಿಪ್ಪೇಸ್ವಾಮಿ ಎಂಬುವರು ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಯವರ ಟ್ರಸ್ಟ್ ಅಡಿಯಲ್ಲಿ ನಡೆಸುತ್ತಿದ್ದು, ಸುಮಾರು 103 ರಾಸುಗಳಿಗೆ ರಕ್ಷಣೆಯ ಜೊತೆಗೆ ಉತ್ತಮ ವಸತಿಯನ್ನು ನೀಡಲಾಗಿದೆ. ಅನಾಥ, ಅಶಕ್ತ, ನ್ಯಾಯಾಲಯ ಪ್ರಕರಣದ, ದನಗಳನ್ನು ರಕ್ಷಣೆ ಮಾಡುವುದರ ಜೊತೆ ಪುಣ್ಯಕೋಟಿ ದತ್ತು ಯೋಜನೆಯ ಕಾರ್ಯಕ್ರಮದಲ್ಲಿಯು ಸಹ ತೊಡಗಿಸಿಕೊಂಡಿದ್ದು, ಇದಕ್ಕೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಸಹ ಕೈಜೋಡಿಸಿದೆ. ಸಹಾಯಧನ ಯೋಜನೆಯನ್ನು ರಾಯಮ್ಮ ಗೋಶಾಲೆಗೆ ಒದಗಿಸುವಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಆಸಕ್ತರು ರಾಸುಗಳನ್ನು ದತ್ತು ಸ್ವೀಕರಿಸಲು ಸಹಾಯವಾಗುವಂತೆ ಆನ್ಲೈನ್ ನಲ್ಲಿ ನಮೂದಿಸಿ ಪ್ರಚಾರ ಮಾಡುವಲ್ಲಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಬಹಳ ಮುಖ್ಯ ಪಾತ್ರ ವಹಿಸಿರುವುದು ತುಂಬ ಸಂತೋಷದ ವಿಷಯವಾಗಿದೆ.
Copyright 2022 Designed By KEONICS-ISEARCH