ದೇಶೀ ತಳಿಯ ಗೋ ಸಂತತಿಯ ಸೇವೆ, ಸಂರಕ್ಷಣೆ , ನಮ್ಮ ಸಂಕಲ್ಪವಾಗಿದೆ .1935 ನೇ ಇಸವಿಯಲ್ಲಿ ಬೆಣ್ಣೆಗದ್ದೆ ನರಸಿಂಹ ದೇವಾಲಯದ ಅರ್ಚಕರಾಗಿ ಬಂದು ಬಡತನವನ್ನೇ ಹಾಸಿಹೊದ್ದರೂ ಗೋಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ದತ್ತ ಭಕ್ತರು ಆಕಾಲದಲ್ಲಿಯೇ ಗಾಣಗಾಪುರಕ್ಕೆ ಕಾಲುನಡಿಗೆಯಲ್ಲಿ ಹೋಗಿಬಂದ. ಕಂಬದ ಮನೆ ಮೂಲದ ನಾರಾಯಣ ನಾರಾಯಣ ಹೆಗಡೆ ಮತ್ತು ಅವರ ತಮ್ಮಗಣಪತಿನಾರಾಯಣ ಹೆಗಡೆಯವರಿಂದ ಆರಂಭವಾದ. ದೇವರ ಕೊಟ್ಟಿಗೆ ಇದುವರೆಗೆ ಸಾವಿರಾರು ಪಶುಗಳನ್ನು ಕಂಡಿದೆ. 2013 ರಲ್ಲಿ ಗುರುಕುಲ ವಿದ್ಯಾಪೀಠ ವಿಶ್ವಸ್ತವು ಆ ಜವಾಬ್ದಾರಿಯನ್ನು ವಹಿಸಿಕೊಂಡು ಗೋ ಸೇವಾಧಾಮ ಎಂಬ ಈ ಹೆಸರಿನಲ್ಲಿ ವ್ಯವಸ್ಥಿತ ಪ್ರಕಲ್ಪವನ್ನು ನಿರ್ಮಿಸಲು ಸಂಕಲ್ಪ ಮಾಡಿತು. 5 ಹಸುಗಳಿಂದ ಪುನರಾರಂಭವಾದ ಈ ಗೋಶಾಲೆಯಲ್ಲಿ ಇದೀಗ 100 ಹಸುಗಳ ಪಾಲನೆ ಪೋಷಣೆ ನಡೆಯುತ್ತಿದೆ ಪ್ರತಿ ತಿಂಗಳು ಸುಮಾರು 2.50 ಲಕ್ಷರೂಪಾಯಿಗಳವೆಚ್ಚವಾಗುತ್ತಿದ್ದು ತಿಂಗಳಿಗೆ ವೆಚ್ಚದ ೬೦% ಗೋಶಾಲೆಯ ಉತ್ಪನ್ನಗಳಿಂದಲೂ ೪೦% ದಾನಿಗಳಿಂದಲು ನಡೆಸುವ ಯತ್ನ ಮಾಡಲಾಗುತ್ತಿದೆ. ಇದೀಗ. ೧೫ + 8 ಲಕ್ಷ ರೂಗಳ 108 ಹಸುಗಳ ಸಾಮರ್ಥ್ಯದ ಗೋಶಾಲೆ ನಿರ್ಮಾಣವಾಗಿದೆ ಇದು ಭರ್ತಿಯಾಗಿದ್ದು ಎರಡನೇ ಹಂತದ ವಿಸ್ತರಣೆ , ಗೋ ಜನ್ಯ ಉತ್ಪನ್ನಗಳ ಸಂಸ್ಕರಣಾ ಘಟಕ ನಿರ್ಮಾಣತುರ್ತಾಗಿ ಆಗಬೇಕಾಗಿದೆ . ಸಮಾಜವು ಕೈ ಜೋಡಿಸಿದರೆ. ಇದು ಕಷ್ಟವಲ್ಲ. ಎಲ್ಲರೂಕೈ ಜೋಡಿಸಲು ಗುರುಕುಲ ವಿಶ್ವಸ್ತವು ಕರೆ ನೀಡುತ್ತಿದೆ.
Copyright 2022 Designed By KEONICS-ISEARCH