ವಿಜಯಪುರದ ಗೋಪಾಲ ವಿದ್ಯಾಪ್ರತಿಷ್ಠಾನವು ಪ್ರತಿಷ್ಠಿತಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸ್ಥಿರ ಕಾರ್ಯಮಾಡುವ ಸಂಸ್ಥೆಯಾಗಿದ್ದು, ಕಳೆದ 15 ವರ್ಷಗಳಿಂದ ಗುರುಕುಲಪದ್ಧತಿಯಲ್ಲಿ ವಿದ್ಯಾಪೀಠವನ್ನು ನೆಡೆಸುತ್ತಿದೆ. ಗುರುಕುಲದಲ್ಲಿ ಗೋಶಾಲೆಯೂ ಇರಬೇಕು ಎಂದು ಚಿಂತಿಸಿ 8 ವರ್ಷಗಳ ಹಿಂದೆ 2 ಆಕಳುಗಳಿಂದ ಗೋಶಾಲೆ ಪ್ರಾರಂಭವಾಯಿತು. ದೇವರ ಗುರುಗಳ ಅನುಗ್ರಹದಿಂದ ಗೋಶಾಲೆಯಲ್ಲಿ ಈಗ 50 ಕ್ಕೂ ಹೆಚ್ಚು ಆಕಳುಗಳ ಸಂರಕ್ಷಣೆ ನಡೆಯುತ್ತಲಿದೆ. ಆಕಳುಗಳನ್ನು ನೋಡಕೊಳ್ಳಲು 3 ಗಂಡಾಳು ಹಾಗೂ 3 ಹೆಣ್ಣಾಳುಗಳು ಅಲ್ಲಿಯೇ ನೆಲೆ ನಿಂತು ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿಕೊಳ್ಳಲು ಇಬ್ಬರು ಊಸ್ತೂವಾರಿಪುರುಷರನ್ನೂ ನೇಮಿಸಲಾಗಿದೆ. ಹನುಮಗಿರಿಯ ಆಶ್ರಮದಲ್ಲಿಯೇ ಹಸಿ ಮೇವು ಬೆಳೆಯುವ ವ್ಯವಸ್ಥೆ ಇದ್ದು ವರ್ಷಕ್ಕೆ ಬೇಕಾಗುವ ಒಣಮೇವು ಸಂಗ್ರಹ ಮಾಡಿ ಇಡಲಾಗುತ್ತದೆ. ಮೇವು ಕತ್ತರಿಸುವ ಯಂತ್ರವನ್ನೂ ತಂದಿದ್ದು ವ್ಯರ್ಥವಾಗಿ ಮೇವು ಹಾಳಾಗುವುದು ಕಡಿಮೆಯಾಗಿದೆ. ಕೇವಲ ಗೋಮೂತ್ರ ಹಾಗೂ ಗೋಮಯದ ಮಾರಾಟದಿಂದಲೇ ಗೋಶಾಲೆ ನಡೆಯುಂತಾಗಬೇಕು ಎಂಬ ಸಂಕಲ್ಪವಿದೆ. ಗೋಮಯ ಹಾಗೂ ಗೋಮೂತ್ರದಿಂದ ಅನೇಕ ಔಷಧಿಗಳು, ದಿನನಿತ್ಯದ ಉಪಯೋಗಿ ವಸ್ತುಗಳನ್ನು ಮಾಡಲು ಯಂತ್ರಗಳ ಖರೀದಿ ಆಗಬೇಕಾಗಿದೆ. 1000 ಸಾವಿರ ಆಕಳುಗಳ ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಸಂಕಲ್ಪವಿದೆ. ತಮ್ಸಮಂತಹ ಸಜ್ಜನರ ಸಹಕಾರ ದೇವರ ಗುರುಗಳ ಅನುಗ್ರಹದಿಂದ ನೆರವೇರುತ್ತದೆ ಎಂಬ ಭರವಸೆ ಇದೆ.
Copyright 2022 Designed By KEONICS-ISEARCH