ದತ್ತು ಮತ್ತು ದೇಣಿಗೆ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಿ:
1. ನೀವು ದಾನ ಮಾಡಿದ ನಂತರ , ನಿಮ್ಮನ್ನು ಪುಣ್ಯಕೋಟಿ ದತ್ತು ಯೋಜನೆಯ ಸದಸ್ಯ ಎಂದು ಪರಿಗಣಿಸಲಾಗುತ್ತದೆ
2. ಇಚ್ಛಿಸುವ ದಾನಿಗಳು ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಗೋಶಾಲೆಯಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿಕೊಳ್ಳಬಹುದು.
3. ದಾನಿಯು ಅಂತಹ ವಿವರಗಳನ್ನು ಪ್ರದರ್ಶಿಸಲು ಬಯಸದ ಹೊರತು ದತ್ತು ಮತ್ತು ಸದಸ್ಯತ್ವದ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ.
4. ದಾನಿಗಳ ವಿವರಗಳನ್ನು ಅವರ ಅನುಮತಿಯಿಲ್ಲದೆ ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.
5. ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯಂತಹ ದಾನಿಗಳ ಸಂಪರ್ಕ ವಿವರಗಳಲ್ಲಿ ಯಾವುದೇ ಬದಲಾವಣೆಯಿದ್ದರೆ, ಸಂಬಂಧಪಟ್ಟ ಗೋಶಾಲೆಗೆ ಸೂಚಿಸಬಹುದು.
6. ದಾನಿಗಳಿಗೆ ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ನೀಡುವುದು ಗೋಶಾಲೆಯ ಜವಾಬ್ದಾರಿಯಾಗಿರುತ್ತದೆ. ಈ ಕುರಿತು ಗೋಶಾಲೆಯಿಂದ ಯಾವುದೇ ಲೋಪದೋಷಗಳಾದಲ್ಲಿ ಪಶುಸಂಗೋಪನಾ ಇಲಾಖೆಯು ಜವಾಬ್ದಾರಿಯುತವಾಗಿರುವುದಿಲ್ಲ
7. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ, 2021 ರ ಅಡಿಯಲ್ಲಿ ಉಲ್ಲಂಘನೆಯ ಕಾರಣಕ್ಕಾಗಿ ಮಾಲೀಕರು/ಸಾಗಾಟದಾರರಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ದನಕರುಗಳಿಗೂ ದೇಣಿಗೆಗಳನ್ನು ನೀಡಬಹುದು/ದತ್ತು ಪಡೆಯಬಹುದಾಗಿದೆ. ಆದಾಗ್ಯೂ, ಅಂತಹ ಪ್ರಾಣಿಗಳನ್ನು ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾಲೀಕರಿಗೆ ಹಿಂತಿರುಗಿಸಿದರೆ, ದಾನಿಗಳು ದಾನ ಮಾಡಿದ ಮೊತ್ತವನ್ನು ಇನ್ನೊಂದು ಪ್ರಾಣಿಗೆ ಬಳಸಬೇಕು. ಈ ಬಗ್ಗೆ ದಾನಿಗೆ ಗೋಶಾಲೆಯಿಂದ ಸೂಚನೆ ಕಳುಹಿಸುವುದು.
8. ದತ್ತು ಪಡೆದ ಜಾನುವಾರು ಮರಣ ಹೊಂದಿದ ಸಂದರ್ಭದಲ್ಲಿ, ದತ್ತು ಪಡೆದವರಿಗೆ ಸದರಿ ಗೋಶಾಲೆಯಿಂದ ಆ ಬಗ್ಗೆ ವಿವರವನ್ನು ತಿಳಿಸಲಾಗುತ್ತದೆ ಹಾಗೂ ದತ್ತುದಾರರು ನೀಡಿರುವ ದತ್ತು ನಿಧಿಯ ಬಾಕಿ ಮೊತ್ತವನ್ನು ಬೇರೆ ಜಾನುವಾರಿಗೆ ವರ್ಗಾಯಿಸಲಾಗುತ್ತದೆ. ಈ ಬಗ್ಗೆ ದಾನಿಗಳಿಗೆ ಗೋಶಾಲೆಯಿಂದ ಸೂಚನೆ ಕಳುಹಿಸುವುದು.
9. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (KEONICS) ಮತ್ತು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ನಡುವೆ ಮಾಡಿಕೊಂಡಿರುವ MOU ಪ್ರಕಾರ ದೇಣಿಗೆ/ ಕೊಡುಗೆ ಮೊತ್ತವನ್ನು ಆಯಾ ಗೋಶಾಲೆಗೆ ವಿತರಿಸಲಾಗುತ್ತದೆ/ಇತ್ಯರ್ಥಪಡಿಸಲಾಗುತ್ತದೆ.